ನಿಲ್ಲು ನಿಲ್ಲು ನಿಲ್ಲು ಮನವೆ

ನಿಲ್ಲು ನಿಲ್ಲು ನಿಲ್ಲು ಮನವೆ
ಮರಳಿ ಯಾತಕ ಮರೆಯುವಿ
ಟೊಂಗಿ ಟೊಂಗಿಗೆ ತೂರಿ ಹಾರುವಿ
ಮಂಗನಾಟವ ಮಾಡುವಿ

ಯಾರು ಯಾರಿಗೊ ಶಿವಾ ಅನ್ನುತ
ಗುಡ್ಡ ಬೆಟ್ಟಾ ತಿರುಗಿದಿ
ಗಡಿಗಿ ಮಡಕಿ ಕುಡಿಕಿ ಚಟಿಗಿಗೆ
ಅಡ್ಡ ಉದ್ದಾ ಉರುಳಿದಿ

ಚರ್ಮ ಚೀಲಕ ಮಣ್ಣ ಹೆಂಟಿಗೆ
ದೇವರಂತ ಹಾಡಿದಿ
ನಿಂಬಿ ಹಣ್ಣು ಮಂತ್ರ ತಾಯತ
ಸತ್ಯ ಅಂತ ನಂಬಿದಿ

ಮಾಯಿ ನಿನ್ನಾ ತಲೀ ಮ್ಯಾಲಕ
ಸುಣ್ಣ ಸುರಿಯಲು ಚೀರಿದಿ
ನೀನು ನಂಬಿದ ಜನರೆ ನಿನ್ನನು
ಗೋಣು ಮುರಿಯಲು ನರಳಿದಿ

ನೀನು ಯಾರನು ಹುಡಿಕಿ ತಿರುಗಿದಿ
ಅವನೆ ನಿನ್ನಾ ಹುಡುಕಿದಾ
ಮನೆಯಬಾಗಿಲು ಬಡಿದು ಬಂದಾ
ಸತ್ಯ ಶ್ರೀಗುರು ಕೂಗಿದಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾ ಬಂದ್ರೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೦

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys